Sunday, August 16, 2015

ಉಪ್ಪಿಟ್ಟು ಸಿನೇಮಾ ವಿಮರ್ಶೆ

ಉಪ್ಪಿಟ್ಟು






ಸೂಪರ್‍ ಸಿನೇಮಾದ ನಂತರ ಬಹಳಷ್ಟು ಟೈಮ್ ತಗೊಂಡು, ಉಪೇಂದ್ರ ಅವರು ಡೈರೆಕ್ಟರ್ ಹ್ಯಾಟ್ ಹಾಕಿರೊ ಸಿನೇಮಾ ಅಂದ ತಕ್ಷಣ ಜನರಲ್ಲಿ ನಿರೀಕ್ಷೆ ಇದ್ರೆ ಏನು ತಪ್ಪಿಲ್ಲ.
ಉಪೇಂದ್ರ ಅವರು ಇಟ್ಟಿರೊ ಹವಾನೆ ಹಂಗೆ, ಡಿಫರೆಂಟಾಗಿ, ವಿಚಿತ್ರವಾಗಿ, ಉಲ್ಟಾ-ಸೀದಾವಾಗಿ, ಹುಳ-ಹಾವು ಬಿಟ್‍ಬಿಟ್ಟು ಕಥೆ ಹೇಳೊದೆ ಅವರ ಸ್ಪೆಷಾಲಿಟಿ ಅಂದ್ರೆ ತಪ್ಪಲ್ಲ.

ಸರಿ - ನೇರ "ಉಪ್ಪಿಟ್ಟಿಗೆ" ಬರೋಣ.
ಕಥೆ ಎನಪ್ಪ ಅಂದ್ರೆ, ಏನು ಇಲ್ಲ!
ಮತ್ತೇನು ಎರಡೂವರೆ ಗಂಟೆ ಏನ್ ನೋಡಿ ಬಂದೆ ಗುರು ಅಂತ ಯಾರಾದ್ರು ಕೇಳಿದ್ರೆ, ಅಲ್ಲೆ ಇರೋದು ವಿಷ್ಯ!
ಹೆಂಗೆ ಮುಗ್ಸಿದಾನೆ ಉಪ್ಪಿ ಸಿನೇಮಾನ?
ಹಂಗೆ ಈಸಿಯಾಗಿ ಹೇಳಕ್ಕಾಗಲ್ಲಮ್ಮಾ! ಏನಂದ್ರೆ "ಜಾಸ್ತಿ ಯೋಚನೆ ಮಾಡ್‍ಬೇಡ, ಹಂಗೆ ಒಮ್ಮೆ ನೋಡ್‍ಕೊಂಡು ಬಾಪ್ಪಾ"
ಥೂ! ಹೋಗ್ಲಿ! ಕ್ಲೈಮ್ಯಾಕ್ಸ್ ಹೇಳಕ್ಕಾಗಲ್ಲ ಅಂದ್ರೆ ಬಿಟ್‍ಹಾಕು, ಹೆಂಗೆ ಫಿಲಮ್ ಶುರುಮಾಡಿದಾನೆ ಉಪ್ಪಿ?
ಫಿಲಮ್ ಶುರುನಲ್ಲೆ ಎಂಡಾಗತ್ತೆ, ಎಂಡಲ್ಲಿ ಫಿಲಮ್ದು ಟೈಟಲ್ ಬರತ್ತೆ.
ಲೋ, ಏನೋ ಅಂತಿದ್ದೀಯ ನೀನು! ನಂಗೆ ತಲೆ-ಬುಡ ಎರಡೂ ಅರ್ಥ ಆಗ್ತಿಲ್ಲ!
ಹೂನಪ್ಪಾ, ಉಪ್ಪಿದಲ್ವಾ ಸಿನೇಮಾ, ಇನ್ ಹ್ಯಾಂಗಿರಕ್ಕೆ ಸಾಧ್ಯ?
ಅವನಜ್ಜಿನ ತಂದು! ಹಾಳಾಗಿ ಹೋಗ್ಲಿ, ನಾನು ನೋಡ್‍ಕೊಂಡೇ ಬರ್ತೀನಿ, ಅದೇನು ಕಿತ್ತಾಕಿದಾನೆ ಈ ಸಿನೇಮಾದಲ್ಲಿ ಅಂತ!
ಹಾಗೆ ಬಾ ದಾರಿಗೆ!

ನಾನೇನು ತೀರಾ ಉಪೇಂದ್ರ ಫ್ಯಾನಲ್ಲ, ಆದ್ರೆ ಅವರ ಕೆಲವೊಂದು ಸಿನೇಮಾನ ಬಹಳ ಮೆಚ್ಚಿದ್ದೀನಿ, ಹೆಚ್ಚಾಗಿ ಡೈರೆಕ್ಷನ್‍ನ.
ಉಪೇಂದ್ರ ಆಕ್ಟಿಂಗ್ ಬಗ್ಗೆ ಜಾಸ್ತಿ ಏನಿಲ್ಲ, ಕೆಲವೊಮ್ಮೆ ಓವರ್-ಆಕ್ಟಿಂಗ್ ನೋಡಿ ಅರ್ಧಕ್ಕೆ ನಿಲ್ಸಿರೊ ಫಿಲಮ್‍ಗಳು ಉಂಟು, ರಕ್ತ-ಕಣ್ಣೀರು ಒಂದು ಹೊರತುಪಡಿಸಿ.
ತರಲೆ ನನ್ ಮಗ, ಶ್!, ಓಂ, ಆಪರೇಶನ್ ಅಂತ, ಸ್ವಸ್ಥಿಕ್ - ಎಲ್ಲಾ ವಿಭಿನ್ನವಾಗಿರೊ ಕ್ಯಾಟಗರಿ, ಬೇರೆ ಬೇರೆ ನಾಯಕ ನಟರು, ಒಳ್ಳೆ ಸಿನೇಮಾಗಳು.
ಏ, ಉಪೇಂದ್ರ, ಸೂಪರ್, ಉಪ್ಪಿಟ್ಟು - ಅವರೆ ನಾಯಕ. ಆದ್ರೆ, ಎಲ್ಲಾದರಲ್ಲೂ ಏನೋ ಒಂದು ಸಾಮ್ಯತೆ ಇರೊ ಸಿನೇಮಾಗಳು. ಡಿಫರೆಂಟಾಗಿದೆ, ಆದ್ರೆ ಬೇರೆಯವರ ಸಿನೇಮಾದಿಂದ, ಉಪೇಂದ್ರ ಅವರ ಸಿನೇಮಾದಿಂದಲ್ಲ.

ಉಪ್ಪಿಟ್ಟು ನಲ್ಲಿ ಒಂದು ಸಿಂಪಲ್ (ಆದರೆ ಒಳ್ಳೆಯ) ಐಡಿಯೋಲಜಿನ ಇಟ್ಕೊಂಡು ಕಥೆ (ಎನ್ ಕಥೆ ಅಂತ ಕೇಳ್ಬೇಡಿ) ಕಟ್ಟಿರೋದು.
ಯೋಚನೆ ಮಾಡದೆ ವರ್ತಮಾನದಲ್ಲಿ ಬದುಕುವುದಕ್ಕೆ ಪ್ರಯತ್ನಪಟ್ಟರೆ "ನೀನು" ಖುಶಿಯಾಗಿರ್ತೀಯ!
ಹಾಗಿರಕ್ಕೆ ಏನಪ್ಪಾ ಬೇಕು ಅಂದ್ರೆ - ಖುಶಿಯಾಗಿ ಇರೋದಕ್ಕೆ "ಇಷ್ಟ"/"ಇರಾದೆ" ಬೇಕು.
ತಲೇಲಿ ಇರೊ ಮೆದುಳನ್ನು ಭೂತ-ಭವಿಷ್ಯದ ಬಗ್ಗೆ ಅನಾವಶ್ಯಕ ಉಪಯೋಗಿಸೊ (ಹಾಳು ಮಾಡೊ) ಬದಲು, ಈಗಿರೊ ಕ್ಷಣಕ್ಕೆ ಬಿಟ್ಟಿರು.
ಇದೇಲ್ಲಾವನ್ನು ಯೋಚನೆ ಮಾಡಿ, ಇನ್‍ಮೇಲಿಂದ ಯೋಚನೆನ ಮಾಡೋದೇ ಬೇಡ ಅಂತ ನಿರ್ಧಾರ ಮಾಡಿರ್‍ತಾನೆ "ನೀನು".
ನಡುವೆ ಗ್ಯಾಪಲ್ಲಿ ಭೂತಕಾಲದ "ನಾನು" ರೌಡಿಗಳ ಜೊತೆ, ಭವಿಷ್ಯದ "ಅವನು" ಪೋಲೀಸರ ಜೊತೆ ಬಂದು ಹೋಗ್ತಾ, ಕನ್ಫ್ಯೂಷನ್‍ಗೆ ಬೇಕಿರೊ ಎಲ್ಲಾ ಅಂಶಗಳನ್ನು ತುರುಕಿಸಿದ್ದಾರೆ ಉಪ್ಪಿ.
ಗೊಂದಲ ಸೃಷ್ಟಿಸುವುದು (ತಲೆಗೆ ಹುಳ ಬಿಡೋದು) ಉಪೇಂದ್ರ ಅವರ ಮೂಲ ವಿಚಾರವಾಗಿದ್ದರೂ, ಕೆಲವೊಂದು ಅನಾವಶ್ಯಕ ಅನ್ನಿಸುವಷ್ಟಿತ್ತು.
ಕಥಾವಸ್ತುವಿನಲ್ಲಿನ ಲೂಪ್‍ಹೋಲ್ಸ್ ಅಥವಾ, ಉಪ್ಪಿಯ ಉದ್ದೇಶವೆ ಅದೆ ಆಗಿರಬಹುದು - ಆದರೆ, ಕೆಲವೊಂದು ವಿವರಣೆಗೆ ನಿಲುಕದ ಎಳೆಗಳಿವೆ, ಮುಖ್ಯವಾಗಿ:
೧. ನಾಯಕಿ ಮತ್ತು ರೌಡಿಗಳ ಸಂಭಂದ, ಅಪ್ಪ-ಮಗಳು ಅನ್ನಿಸುವಷ್ಟರ ಮಟ್ಟಿನ ಕಮ್ಯುನಿಕೇಷನ್ ಇತ್ತು
೨. ನಾಯಕಿಗೆ ನಾಯಕ ಇಷ್ಟ ಆಗಲು ಇರುವ ಕಾರಣಗಳು (ನನಗೆ) ಕನ್‍ವೆನ್ಸಿಂಗ್ ಇರಲಿಲ್ಲ - ಲವ್ ಅಟ್ ಫಷ್ಟ್ ಸೈಟ್!?
೩. ಪಾರುಲ್ ಯಾದವ್ ನ ಕಥೆಯನ್ನ ಯಾಕೆ, ಹೇಗೆ ಒಮ್ಮಿಂದಲ್ಲೆ ನಂಬಿದಳು ನಾಯಕಿ ಅನ್ನುವುದು ಕೂಡ ಕನ್‍ವೆನ್ಸಿಂಗ್ ಇರಲಿಲ್ಲ
೪. ನಾಯಕನ ತಂಗಿಗೆ ತೊಂದರೆ ಕೊಡುತ್ತಿದ್ದವನ ಕೊಲೆ - ಯಾರಿಂದ, ಯಾಕೆ!

ಓಪನ್ ಎಂಡೆಡ್ ಎಳೆಗಳು ಇರಬಹುದು, ಆದರೆ ಗೊಂದಲಕ್ಕೋಸ್ಕರ ಸೃಷ್ಟಿಮಾಡಿರೊ ಎಳೆಗಳು ಈ ಕಥೆಗೆ ಸೂಕ್ತವಾಗಿಲ್ಲವೇನಿತ್ತೊ.
ಹಾಡುಗಳು ಅಷ್ಟಕ್ಕಷ್ಟೆ, ಸಿನೇಮಾಟೊಗ್ರಾಫಿ ಸಾಮಾನ್ಯ. ಪ್ರತಿ ಫ್ರೇಮಿನಲ್ಲಿ ರಿಚ್‍ನೆಸ್ ಕಾಣಿಸಲು ಬಹಳಷ್ಟು ಅವಕಾಶವಿದ್ದರೂ, ಸರಿಯಾಗಿ ಉಪಯೋಗಿಸಿಕೊಂಡಿಲ್ಲ!
ನಟನೆಯಲ್ಲಿ ಗಮನಾರ್ಹ ರೋಲ್ಸ್ ನನ್ನ ಕಣ್ಣಿಗೆ ಬಿದ್ದಿಲ್ಲ, ಹೊಸ ನಾಯಕಿ, ಹೊಸದಾಗೆ ಕಾಣಿಸ್ತಾಳೆ, ಹಳೆ ಕಲಾವಿದರಿಗೆಲ್ಲ ಉಪ್ಪಿ ಒಂದು ಚಾನ್ಸ್ ಕೊಟ್ಟಿದ್ದಾರೆ.

ನವರಸ ನಾಯಕರ ಕಟ್ಟಾ ಅಭಿಮಾನಿಯೊಬ್ಬ "ಏನ್ ಕಿತ್ತಾಕಿದಾನೆ ನಿಮ್ ಉಪ್ಪಿ ಈ ಮೂವಿಲಿ, ಅದೆ ಹಳಸಿರೊ ನೀನು ಬಿಟ್ಟು?
ಹಳೆ ಚಪ್ಪಲಿಗೆ ಅಂಟಿರೊ ದನದ ಗೂಸ ತರ, ಇನ್ನೂ ಅದ್ರಲ್ಲೆ ತಗಲಾಕೊಂಡಿದ್ದಾನೆ" ಅಂದಿದಕ್ಕೆ,
ಉಪ್ಪಿ ಅಭಿಮಾನಿ ಅಂದ, "ಹಳೆ ಹ್ಯಾನ್ಗೋವರ್ ಇರೋದಿಂದ್ರಾನೆ ಇದಕ್ಕೆ ಉಪ್ಪಿಟ್ಟು ಅಂತ ಹೆಸರಿಟ್ಟಿರೋದು, ಇಲ್ಲಾಂದ್ರೆ ಡಗಾರ್ ಅಂತಾನೆ ಸಿನೇಮಾ ಮಾಡಿರೋನು ನಮ್ ಉಪ್ಪಿ.
ಕೆಲ್ಸಾ ಇಲ್ದಿರೊ ಯಾವೊನೊ ಒಬ್ಬ, ಎನನ್ನೊ ಕೆರ್ಕಳಕ್ಕೆ ಹೋಗಿ, ಇನ್ನೇನೊ ಮಾಡ್ಕೊಂಡ ಅಂತೆ - ಹಾಂಗಾಯ್ತು ನಿನ್ ಕಥೆ. ಡ್ಯಾಶ್ ಮುಚ್ಕೊಂಡು ಸುಮ್ನೆ ಹೊಯ್ತಾ ಇರು, ಅವ್ವ್, ಕಚ್‍ಬುಡ್ತೀನಿ"

ಒಟ್ನಲ್ಲಿ ಉಪ್ಪಿ ಕ್ಲಾಸ್ ಐಡಿಯ ಇಟ್‍ಕೊಂಡು, ಮಾಸ್ ಮೂವಿ ಮಾಡಿ, ತಲೆಕೆಡಿಸುವುದರಲ್ಲಿ "ಎತ್ತಿದ ಕೈ" ಎಂದು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ.

- ಗಿರೀಶ್ ಶೆಟ್ಟಿ

No comments: